ಶನಿವಾರ, ನವೆಂಬರ್ 13, 2010

ನೆನಪುಗಳೇ ಹಾಗೆ



ನೆನಪುಗಳೇ ಹಾಗೆ,ನಗುವ ಮಗುವಿನ ಹಾಗೆ.
ನೆನಪುಗಳೇ ಹಾಗೆ,ತೀರ ಸೇರದ ಅಲೆಗಳ ಹಾಗೆ.
ಭಾವಗಳ ನಭ ಕಲಕಿ ನಿನ್ನ ಹೆಕ್ಕುವ ಹೊತ್ತು
ನೆನಪಾಯಿತೆನಗೆ ನಿನ್ನ ಪ್ರೀತಿಯ ತುತ್ತು.

ನೆನಪುಗಳೇ ಆಸರೆಯು ಬದುಕಲೀಗೆನಗೆ
ಭಾವಗಳೇ ತೋಳ್ಬವು ಈಜಲೆನಗೆ.
ನೀನಿಲ್ಲದಾ ಹಗಲು ಚಂದ್ರನಿಲ್ಲದ ರಾತ್ರಿಯಂತೆ.
ನೀನಿಲ್ಲದಾ ರಾತ್ರಿ ಸೊರ್ಯನಿರದ ಹಗಲಂತೆ.

ಅವನ ದೊರೆನು ನಾನು ನೀನಿಲ್ಲವೆಂದು
ನೀನಿರದ ಬದುಕೆಂದು ಅನಿಸಿಲ್ಲ ಎಂದೂ.
ನಿನ್ನಿರುವಿಕೆ ಬಲ್ಲೆ
ದುಃಖ ಮೀರಿದೆ ಎಲ್ಲೆ.

ಬೀಸುವ ಗಾಳಿಯಲ್ಲೂ ನಿನ್ನದೇ ನಿನಾದ
ಹರಿಯುವ ನೀರಲ್ಲೂ ನಿನ್ನದೇ ಉನ್ಮಾದ.
ಬದುಕ ಪ್ರೀತಿಸುತಿಹೆ ನಾನು
ಬದುಕು ಪೀಡಿಸಿದರೇನು?

ನಾನು ಬದುಕಿಹೆ, ನಿನ್ನ ನೆನಪುಗಳ ಜೊತೆಗೆ
ನೀನು  ಬದುಕಿಹೆ, ನನ್ನ ನೆನಪಾಗಿ, ಜೊತೆಗೆ.

ಒಲವ ದೀವಿಗೆ



ಜಗಕೆಲ್ಲ ಜ್ಯೋತಿರ್ಮಯಿ ಹಣತೆ ದೀಪ
ಪ್ರತೀ ಮನೆಗೂ ಪ್ರತೀ ಮನಕೂ ದಾರಿ ದೀಪ

ಒಲವಿಂದ ಬೆಳಕು
ಬೆಳಕಿಂದ ಬದುಕು
ಬದುಕ ಬೇಕಿದೆ ನಾನು
ಬೆಳಕ ನೀಡುವೆಯೇನು?
ಒಲವ ದೀವಿಗೆ ನೀನು
ಬೆಳಕ ಕಾದಿಹೆ ನಾನು

ಕತ್ತಲಾ ಗರ್ಭದೊಳು ಕುಡಿಯೊಡೆದ ಪ್ರೀತಿ
ಹೃದಯದಾ ದುರ್ಗದೊಳು ಮರಿಯೊಡೆದ ರೀತಿ
ಬೇಡುತಿದೆ ಮನವಿಂದು ಪ್ರೇಮದಾರೈಕೆ
ತೋರು ಬಾ ಏಲೆ ಬೆಳಕೆ ಯಾರು ಆಕೆ?
                                          

ಬುಧವಾರ, ನವೆಂಬರ್ 10, 2010

साथी

   
            बचपन मे खिलोने जवानी मे जोश
            और बुढापे मे इनसान को धन सात देता है !!
             
                  हिम्मत के हतियार अगर हात से खिसके तो
                  तन सात देता है मन सात देता है
                  तब सिर्फ़.........
                                             प्रभु का मनन् सात देता है !!
                                            

ಬರಬೇಕೀಗಷ್ಟೇ.......




ವಸುಂಧರೆ ಕೈತೊಳೆದು ಕಂಗೊಳಿಸುವಾ ಹೊತ್ತು,
ದೂರದಲಿ ಚಿಲಿಪಿಲಿ ಕಿವಿ ತಾಗುತ್ತಿತ್ತು.
ಮೆತ್ತನೆಯ ಹಾಸಿಗೆಗೆ ಬೀಳ್ಕೊಡುವಾ ಹೊತ್ತು,
ಕನಸುಗಳ ಕನವರಿಕೆ ಸುಳಿದಾಡುತಿತ್ತು.

ಯಾವುದೋ ಕರೆಯೊಂದು ಹೊರ ಸೆಳೆಯಿತು ನನ್ನ,
ರಂಗೋಲಿಯ ಮಧ್ಯದಲಿ ಆಗ ನೋಡಿದೆ ನಿನ್ನ.
ಭಾವಗಳ ಭೊರ್ಗರೆತ,
ಸೂಜಿಗಲ್ಲಿನ ಸೆಳೆತ.
ಹೃದಯವೇ ಜರ್ಝರಿತ,
ನೋವಾದರೂ ಹಿತ.
ಭೂರಮೆಯ ಸೌಂದರ್ಯವೆಲ್ಲ ಒಂದೆಡೆಗೆ,
ಕಲ್ಪನೆಯ ಸಾಕಾರ ರೂಪವಿನ್ನೊಂದೆಡೆಗೆ.

ಮಾಡಬೇಕೆಂದಿತು ಮನವು ಪ್ರೇಮ ನಿವೇದನೆ,
ಹೃದಯ ಚೀರಿತು ಒಲ್ಲೆಂದರೆ ವೇದನೆ.
ಅಂದಿಂದ ಬರೀ ಮೂಕ ಸಂವೇದನೆ,
ಕೇಳುವರಾರಿಲ್ಲ ಮೂಕ ಹಕ್ಕಿಯ ರೋದನೆ.
ಒಮ್ಮೆ ಹೇಳಬೇಕೆಂದಿರುವೆ ನನ್ನೆದೆಯ ಭಾವ,
ಹೇಳಲಾಗದೇ ಸುಡುತಿದೆ ನನ್ನೆದೆಯ ಜೀವ.
          
           ಕಾದಿರುವೆ ನಿನಗಾಗಿ,
           ನಿನ್ನ ಸನಿಹಕಾಗಿ.
                   ಬರಬೇಕೀಗಷ್ಟೇ.......
           ಮೌನ ಮಾತಾಗಿ ,
           ಮಾತು ಮುತ್ತಾಗಿ....!!


ಮಂಗಳವಾರ, ನವೆಂಬರ್ 9, 2010

ಮಿಡತೆ



ಕಣ್ಣಲ್ಲೇ ನುಡಿಯುತಿದೆ ಭವಿಷ್ಯವನಾ ಮಿಡತೆ.. !!
ಬತ್ತಿದಾ ಕಣ್ಣುಗಳಲಿ ಭಾವಕ್ಕೇನು ಕೊರತೆ ?
ಹಸಿವು ನೀರಡಿಕೆಯ ಮದ್ದೆ ಬದುಕನ್ನ ಕಟ್ಟಿರಲು..
ಕತ್ತಲಾ ಕೊಣೆಯಲಿ ಬೆಳಕನ್ನೇ ಕಂಡಿರಲು..
ಬದುಕಲಿನ್ನೇಕೆ ಭಯ?
ದೈವ ನೀಡಲು ಅಭಯ..!!

ಪ್ರೀತಿ ಮೊನಚು

ನಿನ್ನ ರೂಪ ಕಂಡವನು

ಕನಸಲ್ಲೂ ನೊಂದಿಹೆನು

ಕಲಕಿಹುದು ನಿನ್ನ ನೆನಪು ಮನದ ತಿಳಿಯ

ಬಿಡಿಸಿ ಹೋದೆಯಾ ಕೊನೆಗೂ ಪ್ರೇಮ ಸುಳಿಯ

          ಅವನ  ಕಾಡದೆ ನಿನ್ನ ಬಿಟ್ಟು ಕೊಟ್ಟೆನು ಎಂದು

          ಚುಚ್ಚುತಿದೆ ನನ್ನೊಳಗೆ ಪ್ರೀತಿ ಮೊನಚು!

          ಮನವು ಹೇಳಿದೆ ಅವಳು ತಿರುಗಿ ಬರುವಳು ಎಂದು

          ಜನವು ಹೇಳಿದೆ ಸುಳ್ಳು ಮೋಹ ಕಳಚು!

ಭಗವಂತನಾ ಭಾಷೆ ಪ್ರೇಮವೆಂಬುದು ತಾನೆ?

ಮತ್ತೇಕೆ ಹೀಗೆ ಕೊಟ್ಟವನೇ ಕಸಿಯುತಾನೆ?

ಎಂದು ಮುಕ್ತಿಯೊ ತಿಳಿಯೆ?

ಕಣ್ಮುಂದೆ ಬರೀ ಕಪ್ಪು.....

ಕೊನೆವರೆಗೊ ಕಾಡುವುದು

ಪ್ರೀತಿಗೆಲ್ಲಿದೆ ಮುಪ್ಪು.....?

ಗುರುವಾರ, ಅಕ್ಟೋಬರ್ 28, 2010

ನನ್ನ ಮೊದಲ ಸಂಬಳ

           
            ನನ್ನ ಮೊದಲ ಸಂಬಳ, ಹೀಗೊಂದು ಕಾನ್ಸೆಪ್ಟ್ ಬರಲು ಕಾರಣ ನನ್ನ ಮೊದಲ ಸಂಬಳ. ಇಲ್ಲಿ ನಾನು ನನ್ನ ಮೊದಲ ಸಂಬಳವನ್ನು ನೊಡಿದ ಅನುಭವದ ಪರಾಮರ್ಶೆ ಮಾಡುವ ಪ್ರಾಮಾಣಿಕ ಪ್ರಯತ್ನ ನಡೆದಿದೆ, ನನ್ನ ಮನಸ್ಸಿನ ದ್ವಂಧ್ವಗಳ ಗುದ್ದಾಟ ನಡೆದಿದೆ.
            ನನ್ನ ದೃಷ್ಟಿಯಲ್ಲಿ ಸಂಬಳ ಎಂದರೆ, ಮುಂದಿನ ಒಂದು ತಿಂಗಳ ಅನ್ನದ ಭರವಸೆ, ಚಿಕ್ಕ ಪುಟ್ಟ ಕಮಿಟ್ಮೆಂಟ್ಗಳ ಸಬ್ಸ್ಟಿಟ್ಯೂಟ್ ....
ತಿಂಗಳು ಪೂರ್ತಿ ದುಡಿದು, ತಿಂಗಳ ಕೊನೆಯ ದಿನ ಪಡೆಯುವ ಹಣದ ತೂಕ ಇಷ್ಟು ಭಾರ, ಎಂದು ತಿಳಿಯಲು ಮೊದಲ ಸಂಬಳವನ್ನೇ ಪಡೆಯಬೇಕಾಯಿತು.ಅದರ ಜೊತೆಗೆ ಮಾನಸಿಕ  ಸ್ಥಿತಿಯೂ  ಬದಲಾದದ್ದು ವಿಚಿತ್ರ. ನನ್ನ ಮೊದಲ ಸಂಬಳದ ಸಂತಸವನ್ನು ಅಮ್ಮನಲ್ಲಿ ಹಂಚಿಕೊಳ್ಳಬೇಕೆನಿಸಿ ಫ಼ೊನಾಯಿಸಿದೆ, ಅಮ್ಮ ಸಂಭ್ರಮಿಸಿದಳು, ಅಪ್ಪಾಜಿ ಹಾರೈಸುತ್ತಾ ಎಷ್ಟು ಬಂದಿದೆ ಎಂದರು. ಒಟ್ಟು ಒಂಭತ್ತು ದಿನದ್ದು 3800 ರೂ. ಎಂದೆ. ನಿನ್ನ ಶಿಕ್ಶಣ ಸಾಲದ ಒಂದು ಕಂತು ಎಂದರು. ಆ ಮಾತಿನಲ್ಲಿ ವ್ಯಂಗ್ಯವಿತ್ತೊ, ನಿಜ ಬದುಕನ್ನು ಅರ್ಥೈಸಿಕೊಡುವ ಪ್ರಯತ್ನವಿತ್ತೊ, ತಿಳಿಯೆ..ಆಗ ನನ್ನ ತಂದೆ ತನ್ನ ಮೊದಲ ಸಂಬಳದ ಬಗ್ಗೆ ಹೇಳಿದ ಮಾತುಗಳು ನೆನಪಾದವು. ಅವರಿಗೆ 150 ರೂ. ಸಂಬಳವಂತೆ, ಅದರಲ್ಲಿ 65 ರೂ. ತಿಂಗಳ ಖರ್ಚಿಗೆ ಸಾಕಾಗುತ್ತಿತ್ತಂತೆ,85 ರೂ ತಿಂಗಳೂ ಉಳಿಯುತ್ತಿತ್ತಂತೆ. ಆ ಮಾತು ನೆನೆದು ಒಮ್ಮೆ ಜೀಬು ಮುಟ್ಟಿಕೊಂಡೆ, ಒಳಗಿದ್ದ 3800 ರೂ. "ಹೇಳು ಗೆಳೆಯಾ ಯಾವುದಕ್ಕೆ ಎಷ್ಟು?" ಎಂದು. ನಾನಂದೆ, "ಆಮೇಲೆ ಯೋಚನೆ ಮಾಡೋಣ ಸಲ್ಪ ಹೊತ್ತು ಅಲ್ಲೇ ಇರು". ಮರುಕ್ಷಣ ಸಂತಸ, ಮರುಕ್ಷಣ ಬೀಸಿದ ಬಿಸಿ ಗಾಳಿ ಮನಸ್ಸನ್ನು ಖಿನ್ನತೆಗೆ ಒಳಪಡಿಸಿತು. ಕೂದಳೊಳಗಿಂದಿಳಿದ ಬೆವರ ಹನಿ ಮೂಗು ಮುಟ್ಟುವ ಮೊದಲು, ಎದೆಯ ಗೂಡಿಂದೊಂದು ಪ್ರಶ್ನೆ "ನನ್ನ ತಂದೆ ಕಳೆದ 25 ವರ್ಷಗಳಿಂದಲೂ ದುಡಿಯುತ್ತಿದ್ದಾರೆ.. ನಾನೂ ಖರ್ಚು ಮಾಡುತ್ತಲೇ ಬಂದೆ.. ಇನ್ನು ಮನೆಯಲ್ಲಿ ಕೇಳಬಾರದು ಎಲ್ಲಾ ಸರಿ ಮಾಡಬೇಕು..".ಎಂದುಕೊಳ್ಳುವಸ್ಟರಲ್ಲಿ ಜೇಬಲ್ಲಿದ್ದ 3800 ರೂ. " ಗುರೂ ಯಾರು ಯಾರಿಗೆ ಎಷ್ಟು?". ನಾನು "ಏ ಗಪ್ ಚುಪ್ ಬಾಯ್ ಮುಚ್" ಎಂದು ತಲೆ ಮೇಲೆತ್ತುವಸ್ಟರಲ್ಲಿ "ಅಯ್ಯೋ ನನ್ನ ಮೊದಲ ಸಂಬಳದಲ್ಲಿ ಅಮ್ಮನಿಗೆ ಬಳೆ ಕೊಡಿಸಬೇಕೆಂದುಕೊಂಡಿದ್ದೆ ಆದರೇ....",.."ಬಾಸ್ ಯಾರಿಗೆ ಎಷ್ಟು?" ಎಂಬ ದ್ವನಿ ಜೇಬೊಳಗಿಂದ. "ಹೊಂ... ಬಾಡಿಗೆಗೆ 1000 , ಊಟದ ಖರ್ಚಿಗೆ 1500, ಬಸ್ಸಿಗೆ 600 , ಪೇಸ್ಟು ಎಣ್ಣೆ,ಸೊಪು ಎಂತೆಲ್ಲಾ 300 , ಕೈ ಕರ್ಚಿಗೆ 400, ಮತ್ತೆ ಬಳೆಗೆ....?????.." ಎಂದು ಕಣ್ಣಾಡಿಸುವಸ್ಟರಲ್ಲಿ "ನಾನಿದ್ದೇನಲ್ಲಾ..!!!" ಎಂದು ಮುಂದಿನ ತಿಂಗಳು ಕೈ ಬೀಸಿದಂತಾಗಿ, ನಿಟ್ಟುಸಿರು.....