ವಸುಂಧರೆ ಕೈತೊಳೆದು ಕಂಗೊಳಿಸುವಾ ಹೊತ್ತು,
ದೂರದಲಿ ಚಿಲಿಪಿಲಿ ಕಿವಿ ತಾಗುತ್ತಿತ್ತು.
ಮೆತ್ತನೆಯ ಹಾಸಿಗೆಗೆ ಬೀಳ್ಕೊಡುವಾ ಹೊತ್ತು,
ಕನಸುಗಳ ಕನವರಿಕೆ ಸುಳಿದಾಡುತಿತ್ತು.
ಯಾವುದೋ ಕರೆಯೊಂದು ಹೊರ ಸೆಳೆಯಿತು ನನ್ನ,
ರಂಗೋಲಿಯ ಮಧ್ಯದಲಿ ಆಗ ನೋಡಿದೆ ನಿನ್ನ.
ಭಾವಗಳ ಭೊರ್ಗರೆತ,
ಸೂಜಿಗಲ್ಲಿನ ಸೆಳೆತ.
ಹೃದಯವೇ ಜರ್ಝರಿತ,
ನೋವಾದರೂ ಹಿತ.
ಭೂರಮೆಯ ಸೌಂದರ್ಯವೆಲ್ಲ ಒಂದೆಡೆಗೆ,
ಕಲ್ಪನೆಯ ಸಾಕಾರ ರೂಪವಿನ್ನೊಂದೆಡೆಗೆ.
ಮಾಡಬೇಕೆಂದಿತು ಮನವು ಪ್ರೇಮ ನಿವೇದನೆ,
ಹೃದಯ ಚೀರಿತು ಒಲ್ಲೆಂದರೆ ವೇದನೆ.
ಅಂದಿಂದ ಬರೀ ಮೂಕ ಸಂವೇದನೆ,
ಕೇಳುವರಾರಿಲ್ಲ ಮೂಕ ಹಕ್ಕಿಯ ರೋದನೆ.
ಒಮ್ಮೆ ಹೇಳಬೇಕೆಂದಿರುವೆ ನನ್ನೆದೆಯ ಭಾವ,
ಹೇಳಲಾಗದೇ ಸುಡುತಿದೆ ನನ್ನೆದೆಯ ಜೀವ.
ಕಾದಿರುವೆ ನಿನಗಾಗಿ,
ನಿನ್ನ ಸನಿಹಕಾಗಿ.
ಬರಬೇಕೀಗಷ್ಟೇ.......
ಮೌನ ಮಾತಾಗಿ ,
ಮಾತು ಮುತ್ತಾಗಿ....!!
Enu Kavivaryaru itteechege romantic poems baritidaare??
ಪ್ರತ್ಯುತ್ತರಅಳಿಸಿ